111 views 0 secs 0 comments

ಯುವತಿ ಸಿಗದ ಕಾರಣಕ್ಕೆ ಆಕೆ, ಸ್ನೇಹತನಿಗೆ ಗುಂಡು ಹಾರಿಸಿ, ತಾನೂ ಹಾರಿಸಿಕೊಂಡ ಪಾಗಲ್!

In ಅಪರಾಧ, ದೇಶ
April 05, 2024

ಇಂದೋರ್: ಯುವಕನೊಬ್ಬ ತಾನು ಇಷ್ಟ ಪಟ್ಟಿದ್ದ ಯುವತಿ ಸಿಗಲಿಲ್ಲ ಎಂಬ ಕಾರಣಕ್ಕೆ ಆಕೆ ಹಾಗೂ ಆಕೆಯ ಸ್ನೇಹಿತನನ್ನು ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡಿರುವ ಘಟನೆ ನಡೆದಿದೆ.

ಈ ಘಟನೆ ಮಧ್ಯಪ್ರದೇಶದ ಇಂದೋರ್ ​​ನಲ್ಲಿ ನಡೆದಿದೆ. ತ್ರಿಕೋನ ಪ್ರೇಮ ಪ್ರಕರಣ ಎಂದು ಇದಕ್ಕೆ ಪೊಲೀಸರು ಹೇಳಿದ್ದಾರೆ. ಘಟನೆಗೂ ಮುನ್ನ ಮೂವರು ದೇವಸ್ಥಾನದಲ್ಲಿ ಭೇಟಿಯಾಗಿದ್ದಾರೆ. ಮೂರು ಜನರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು 26 ವರ್ಷದ ಅಭಿಷೇಕ್​​​ ಯಾಧವ್ ಎಂದು ಗುರುತಿಸಲಾಗಿದೆ. ಈತ ಸ್ನೇಹಾ ಜಾಟ್​​ (22) ಹಾಗೂ ಈಕೆಯ ಪ್ರೇಮಿ ದೀಪಕ್​ ಜಾಟ್ ​​​ನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಹತ್ಯೆಯಾಗಿರುವ ಸ್ನೇಹಾ ಮತ್ತು ದೀಪಕ್ ಇಬ್ಬರು ಕೂಡ ಪ್ರೀತಿಸುತ್ತಿದ್ದರು. ಅಭಿಷೇಕ್​​​ ಸ್ನೇಹಾನ್ನು ಪ್ರೀತಿ ಮಾಡುತ್ತಿದ್ದ, ಸ್ನೇಹಾ ಅಭಿಷೇಕ್​​ನ ಪ್ರೀತಿಯನ್ನು ತಿರಸ್ಕರಿಸಿದ್ದಳು ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅಭಿಷೇಕ್​​​​ ಗನ್​​​ ತೆಗೆದು, ಸ್ನೇಹಾ ಹಾಗೂ ದೀಪಕ್​​​ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಈ ವೇಳೆ ಇಬ್ಬರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಎಳೆದು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ