Home > Articles posted by Honnappa
FEATURE
on Jan 10, 2025
61 views 0 secs

ಲಂಚ ಪಡೆಯುತ್ತಿದ್ದಾಗ ಸರ್ಕಾರಿ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಅಡಿಷನಲ್ ಸೆಕ್ರೇಟರಿ ವೆಂಕಟೇಶ್(42) ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ವೆಂಕಟೇಶ್, ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್‌ ನ ಪರ್ಮಿಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಅನುಮತಿ ಸಿಕ್ಕಿದ್ದ ಅರ್ಜಿಗೆ ಮತ್ತೆ ಅನುಮತಿ ಹೆಸರಿನಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅರ್ಬಾಜ್ ಖಾನ್ ಎಂಬ ವ್ಯಕ್ತಿಯಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಅರ್ಬಾಜ್ ಲೋಕಾಯುಕ್ತರಿದೆ ದೂರು ನೀಡಿದ್ದರು. 35,100 ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ರೆಡ್… Read More

FEATURE
on Jan 10, 2025
51 views 2 secs

2014-15ರ ಕಾಂತರಾಜು ಜಾತಿ ಗಣತಿ (Caste census)ವಿರುದ್ಧ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.ಕಾಂತರಾಜ ಆಯೋಗ ಸಿದ್ದಪಡಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದೆ. ಪ್ರತಿ ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಿ ಜಾತಿ ಗಣತಿ ಸಿದ್ದಪಡಿಸಿಲ್ಲ. ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ಆದರೆ, ವರದಿಯಲ್ಲಿ 5.98 ಕೋಟಿ ಜನಸಂಖ್ಯೆ ಲೆಕ್ಕ ತೋರಿಸಿದ್ದಾರೆ. ಹಾಗಾದರೆ ಇನ್ನೊಂದು ಕೋಟಿ ಜನಸಂಖ್ಯೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಈ ಜಾತಿ ಗಣತಿಯಲ್ಲಿ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡದೆ, ಪ್ರತಿ… Read More

FEATURE
on Jan 10, 2025
74 views 2 secs

ಸಿಎಂ ಸಿದ್ದರಾಮಯ್ಯ( CM Siddaramaiah) ಅವರ ಕನಸಿನ ಯೋಜನೆಗೆ ಸ್ವತಃ ಸಿಎಂ ಎಳನೀರು ಬಿಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆಯೊಂದು ಈಗ ಕಾಡುತ್ತಿದೆ. ಬಡವರ ಪಾಲಿನ “ಅನ್ನ”ರಾಮಯ್ಯ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಈಗ ಖಾಸಗಿ ಸಂಸ್ಥೆಗಳ ಪಾಲಾಗುತ್ತಿದೆ.ಹೌದು!! ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಅಂತ ಹೆಸರು ಪಡೆದಿದ್ದ ಇಂದಿರಾ ಕ್ಯಾಂಟೀನ್( Indira Canteen) ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಮಹಿಳಾ ಸಂಸ್ಥೆಗೆ ವಹಿಸಲು ಸಿಎಂ ತೀರ್ಮಾನ ಮಾಡಿದ್ದಾರೆ ಎಂದು ತಿಳಿದು… Read More

FEATURE
on Jan 10, 2025
55 views 1 sec

ನೆಲಮಂಗಲದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಸೀಗೆಪಾಳ್ಯದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ನೆಲಮಂಗಲದ ಮಂಜುನಾಥ್ ಎಂಬುವವರ ತೋಟದಲ್ಲಿ ಚಿರತೆ (Leopard)ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬನ ಮೇಲೆ ಹೊಂಚು ಹಾಕಿ ಕುಳಿತಾಗ ಪತ್ತೆಯಾಗಿದೆ. ಇದನ್ನು ಕಂಡು ಕ್ಷಣಾರ್ಧದಲ್ಲೇ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಶ್ವಾನದ ಮೇಲೆ ದಾಳಿ ಮಾಡಿದೆ. ಮನೆಯ ಮಾಲೀಕ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಒಂದು ತಿಂಗಳ ಹಿಂದೆ ರೈತ ಮಹಿಳೆ ಮೇಲೆ ಚಿರತೆ… Read More

FEATURE
on Jan 10, 2025
64 views 2 secs

ನವದೆಹಲಿ: ತಮ್ಮ ಪತ್ನಿ ಹಾಗೂ ಖ್ಯಾತ ಕೊರಿಯಾಗ್ರಫರ್‌ ಧನಶ್ರೀ ವರ್ಮಾ ಅವರೊಂದಿಗೆ ವಿಚ್ಛೇದನದ ವದಂತಿ ಬಗ್ಗೆ ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ (Yuzvendra Chahal) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ನಲ್ಲಿ ವಿಚ್ಛೇದನ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ನಡುವೆ ಯಾವುದೇ ರೀತಿಯ ವಿಚ್ಛೇದನ ಪ್ರಕ್ರಿಯೆ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವು ದಿನಗಳ ಹಿಂದೆ ಯುಜ್ವೇಂದ್ರ ಚಹಲ್‌ ಹಾಗೂ ಧನಶ್ರೀ ವರ್ಮ(Dhanshree Verma) ಪರಸ್ಪರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ… Read More

FEATURE
on Jan 10, 2025
59 views 4 secs

ಪ್ರಧಾನಿ ನರೇಂದ್ರ ಮೋದಿ ಪಾಡ್‌ಕಾಸ್ಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಸ್ಟಾಕ್‌ ಮಾರ್ಕೆಂಟಿಂಗ್‌ (Stock Marketing) ಬ್ರೋಕಿಂಗ್‌ ಸಂಸ್ಥೆ ‘ಝೆರೋದಾ’ (zerodha) ಸಹ ಸಂಸ್ಥಾಪಕ ನಿಖಿಲ್ ಕಾಮತ್‌(Nikhil Kamat) ನಡೆಸಿಕೊಟ್ಟಿರುವ ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿ ಮೋದಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಂಭಾಷಣೆಯ ವೇಳೆಯಲ್ಲಿ ಗುಜರಾತ್(Gujarat) ಮುಖ್ಯಮಂತ್ರಿಯಾಗಿದ್ದ ಸಂದರ್ಭದ ಕುರಿತು ಪ್ರಧಾನಿ ಮೋದಿ ಮೆಲುಕು ಹಾಕಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಅವರು ತಾವು ದೇವರಲ್ಲ, ಮಾನವ ಎಂದು ಹೇಳಿಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮೋದಿ ಅವರು ʼʼತಾವು ದೇವರು ಕಳುಹಿಸಿದ ವ್ಯಕ್ತಿ,… Read More

FEATURE
on Jan 10, 2025
60 views 6 secs

ಪತ್ನಿಯ ಮುಖವನ್ನು ಏಕೆ ನೋಡಬಾರದು?: ಸುಬ್ರಹ್ಮಣ್ಯನ್ ಗೆ ಜ್ವಾಲಾಗುಟ್ಟಾ ಪ್ರಶ್ನೆ – ದೊಡ್ಡವರಿಂದ ಇಂಥಾ ಮಾತೇ?: ನಟಿ ದೀಪಿಕಾ ಪಡುಕೋಣೆ ಗರಂ– ಪರಿಶ್ರಮ ಇರಲಿ, ಗುಲಾಮಗಿರಿ ಬೇಡ ಎಂದ ಹರ್ಷ್ ಗೋಯೆಂಕಾ– ವಾರಕ್ಕೆ 90 ದಿನ ಕೆಲಸ ಮಾಡಿ ಎಂದ ಸುಬ್ರಹ್ಮಣ್ಯನ್ ಗೆ ತಪರಾಕಿ ನವದೆಹಲಿ: “ಮನೆಯಲ್ಲಿ ಎಷ್ಟು ಹೊತ್ತು ಪತ್ನಿಯ ಮುಖ ನೋಡಿಕೊಂಡು ಕೂರುತ್ತೀರಿ. ವಾರದಲ್ಲಿ 90 ಗಂಟೆ ಕೆಲಸ ಮಾಡಿ, ಭಾನುವಾರವೂ ದುಡಿಯಿರಿ” ಎಂಬ ಎಲ್ ಆಂಡ್ ಟಿ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಹೇಳಿಕೆ ಈಗ… Read More

FEATURE
on Jan 10, 2025
61 views 1 sec

ಉತ್ತರಪ್ರದೇಶದ ಮೀರತ್ ನಲ್ಲೊಂದು ಭೀಕರ ಕೃತ್ಯ ಲಕ್ನೋ: ಉತ್ತರಪ್ರದೇಶದ ಮೀರತ್ ನ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೊಲೆಯ ಭೀಕರತೆಗೆ ಸಾಕ್ಷಿ ಎಂಬಂತೆ, ಮೂವರು ಹೆಣ್ಣುಮಕ್ಕಳ ಮೃತದೇಹವು ಬೆಡ್ ಬಾಕ್ಸ್ ನೊಳಗೆ ಸಿಕ್ಕಿದೆ. ಯಾರೋ ದುಷ್ಕರ್ಮಿಗಳು ಪತಿ, ಪತ್ನಿ ಮತ್ತು 3 ಮಕ್ಕಳನ್ನು ಕೊಂದಿರುವ ಶಂಕೆಯಿದ್ದು, ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು(police) ತಿಳಿಸಿದ್ದಾರೆ. ಮೀರತ್ ನ ಸೊಹೈಲ್ ಗಾರ್ಡನ್ (Sohail Garden) ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.… Read More

FEATURE
on Jan 10, 2025
53 views 1 sec

2013ರ ಕುಂಭಮೇಳದ ಘಟನೆ ಬಿಚ್ಚಿಟ್ಟ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೊಳಕು, ತ್ಯಾಜ್ಯ ನೋಡಿ ಗಂಗಾಸ್ನಾನ ಮಾಡದೇ ವಾಪಸಾಗಿದ್ದ ವಿದೇಶಿ ನಾಯಕ ಹಿಂದಿನ ಸಮಾಜವಾದಿ ಪಕ್ಷದ ಅವಧಿಯಲ್ಲಿನ ಅವ್ಯವಸ್ಥೆ ಬಗ್ಗೆ ಯೋಗಿ ಕಿಡಿ ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವೆ ವಾಗ್ಯುದ್ಧವೂ ಆರಂಭವಾಗಿದೆ. ಹಿಂದಿನ ಎಸ್ಪಿ ನೇತೃತ್ವದ ಸರ್ಕಾರದ ಆಡಳಿತದ ವಿರುದ್ಧ ಹರಿಹಾಯ್ದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2013ರಲ್ಲಿ ಕುಂಭಮೇಳಕ್ಕೆ… Read More

FEATURE
on Jan 10, 2025
50 views 3 secs

ಪುಜಾರ ಮತ್ತು ರಹಾನೆ ದೇಶೀಯ ಕ್ರಿಕೆಟ್‌ ನಲ್ಲಿ ಆಡುತ್ತಾ ತಮ್ಮ ಕ್ರಿಕೆಟ್‌ ಸಾಧನೆ ಹೆಚ್ಚಿಸಿಕೊಂಡ ರೀತಿಯಲ್ಲೇ ರೋಹಿತ್‌ ಶರ್ಮಾ ಕೂಡ ಫಾರ್ಮ್‌ಗೆ ಮರಳಬೇಕು ಎಂದು ಭಾರತ ತಂಡ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಬಾರ್ಡರ್‌- ಗವಾಸ್ಕರ್‌ ಟ್ರೋಫಿಯಲ್ಲಿ ರೋಹಿತ್‌ ಅವರ ಪ್ರದರ್ಶನದಿಂದ ಅವರಿಗೆ ಆಗಿರುವ ಹಿನ್ನಡೆಯನ್ನು ಉದ್ದೇಶಿಸಿ ಅವರು ಈ ಮಾತನ್ನು ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಿಶ್ಲೇಷಕರು, ಭಾರತ ತಂಡದ ಮಾಜಿ ಆಟಗಾರರಾಗಿರುವ ಸಂಜಯ್ ಬಂಗಾರ್‌ ಮತ್ತು ದೀಪ್ ದಾಸ್ ಗುಪ್ತ ಚರ್ಚೆಯಲ್ಲಿ ಪಾಲ್ಗೊಂಡು… Read More