ಗೆಲುವು ಸೋಲು ಶಿವಣ್ಣ ಎಂದಿಗೂ ಲೆಕ್ಕ ಇಟ್ಟಿಲ್ಲ. ಅದೇ ಕಾರಣಕ್ಕೆ ಶಿವಣ್ಣನ ಸಿನಿಮಾಗಳು ಸಾಲು-ಸಾಲು ಬರುತ್ತಲೇ ಇರುತ್ತೆ. ಇವರ ಸಿನಿಮಾಗಳು ಸೋಲಬಹುದು; ಆದರೆ ಸುಣ್ಣವಾಗಲ್ಲ!. ಪ್ರತಿ ಸಿನಿಮಾಗಳ ಬ್ಯುಸಿನೆಸ್ಸು ಒಂದೊಳ್ಳೆ ಬೆಲೆಗೆ ಕುದುರಿಯೇ ಕುದುರುತ್ತವೆ. ಆ ಮಟ್ಟಿಗೆ ಶಿವಣ್ಣ ಕಟ್ಟಿಕೊಂಡ ಮಾರುಕಟ್ಟೆ, ಸಖತ್ ಕಟ್ಟುಮಸ್ತು. ಅಸಲಿಗೆ, ಯೋಗರಾಜ್ ಭಟ್ಟರು ಸದ್ಯ ಗರಡಿ ಸೋಲಲ್ಲಿ ಸುಳಿದು ಬಂದವರು. ಆ ಸೋಲು ಚಿತ್ರದ ನಿರ್ಮಾಪಕರಿಗೆ ಭಯಾನಕವೆನಿಸಿದೆ. ನಿಜಕ್ಕೂ ಬಿಸಿ ಪಾಟೀಲ್ ‘ಗರಡಿ’ ಎಂದರೆ ನಿಂತಲ್ಲೇ ಹೆಡೆ ಎತ್ತಿ ಬುಸುಗುಡುತ್ತಿದ್ದಾರೆ. ಅದು… Read More
ಎಸ್! ಅಂತೂ ಕಾರ್ಮಿಕ ಇಲಾಖೆ ಕಡೆಗೂ ಕಣ್ತೆರೆದಿದೆ. ಚಿತ್ರೀಕರಣಕ್ಕೆ ಸಂಬಂಧಿಸಿದಂತೆ, ಬಾಲ ನಟ-ನಟಿಯರತ್ತ ಕಾರ್ಮಿಕ ಇಲಾಖೆಯವರು ಚಿತ್ತ ಹರಿಸಿದ್ದಾರೆ. ಅಸಲಿಗೆ ಇದು ಕಾರ್ಮಿಕ ಇಲಾಖೆಯ ಖಡಕ್ ಸಂದೇಶ ಎನ್ನಬಹುದು. ರಿಯಾಲಿಟಿ ಶೋ, ಧಾರಾವಾಹಿ,ಸಿನಿಮಾ ಸೇರಿದಂತೆ ಇನ್ನಿತರೇ ಯಾವುದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಬಾಲ ನಟ-ನಟಿಯರ ವಿದ್ಯಾಭ್ಯಾಸದ ಜೊತೆ ಅವರ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು, ಕಾರ್ಮಿಕ ಇಲಾಖೆ ಸುತ್ತೋಲೆ ಹೊರಡಿಸುವ ಮೂಲಕ ಎಚ್ಚರಿಸಿದೆ. ಹೌದು, ಇನ್ಮುಂದೆ ಯಾವುದೇ ಚಿತ್ರೀಕರಣದಲ್ಲಿ ಬಾಲ ನಟ-ನಟಿಯರು ಕಾಣಿಸಿಕೊಂಡಾಗ, ದಿನದಲ್ಲಿ ಐದು ಗಂಟೆಗೂ ಹೆಚ್ಚು ಕಾಲ ತೊಡಗಿಸಿಕೊಳ್ಳುವಂತಿಲ್ಲ.… Read More
ಎಸ್! ಜಗ್ಗೇಶ್ ಮೈಕ್ ಹಿಡಿದು ನಿಂತರೆ, ನಗದೇ ಇದ್ದೋನೆ ಪಾಪಿ!. ತನ್ನವರನ್ನ ಪ್ರೀತಿಯಿಂದ ಕಾಲೆಳೆಯುತ್ತಲೇ ಬದುಕಿನ ಪಾಠ ಹೇಳುವ ಪರಿಪಾಠ ನಟ ಜಗ್ಗೇಶ್ಗೆ ಸಿದ್ಧಿಸಿದೆ. ತೆರೆಮೇಲೆ ನಗಿಸುವ ಇವರು, ತಮ್ಮ ಬದುಕಲ್ಲಿ ಸಖತ್ ಸೀರಿಯಸ್ ಪರ್ಸನ್. ಅದರಲ್ಲೂ ಧರ್ಮ, ಧಾರ್ಮಿಕ, ಕನ್ನಡದ ವಿಚಾರದಲ್ಲಂತೂ ಒಂದು ಹಿಡಿ ಹೆಚ್ಚೇ ಎನ್ನಬಹುದು. ಅಂಥಹದ್ದೇ ವಿಷಯ ಹೊತ್ತು, ತೆರೆಗೆ ಬರಲು ಸಿದ್ಧವಾದ ಸಿನಿಮಾವೇ ‘ರಂಗ ನಾಯಕ’. ‘ಕನ್ನಡದ ಅಸ್ಮಿತೆ’ಯ ಬಗ್ಗೆ ಮಾತನಾಡುವ ಈ ಚಿತ್ರಕ್ಕೆ ‘ಗುರುಪ್ರಸಾದ್’ ನಿರ್ದೇಶಕರು. ಈ ಸಿನಿಮಾದಲ್ಲಿ ಜಗ್ಗೇಶ್… Read More
ದಿಲ್ಲಿಯ ಭಾರತ ಮಂಟಪದಲ್ಲಿ ನಡೆದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ಪ್ರಧಾನಿ ನರೇಂದ್ರ ಮೋದಿ ಒತ್ತಡ ನಿರ್ವಣೆಗೆ ‘ಸಪ್ತ ಸೂತ್ರ’ ಅನುಸರಿಸುವಂತೆ ಕರೆ ನೀಡಿದರು. ಏಳನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡದಿಂದ ಹೊರಬರಲು ಸಲಹೆಕೊಟ್ಟರು. ‘ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮೊಂದಿಗೆ ನೀವೇ ಸ್ಪರ್ಧೆ ಮಾಡಿ; ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಿಗುವ ಪರಿಪಾಠ ಕೈಬಿಡಿ’ ಎಂದರು. ಪೋಷಕರು ಸಹ ವಿದ್ಯಾರ್ಥಿಗಳ ಮನೋಬಲಕ್ಕೆ ತಕ್ಕಂತೆ ವರ್ತಿಸುವಂತೆ ಕಿವಿಮಾತು ಹೇಳಿದರು.… Read More
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಶ(ಬಿಐಎಸ್) ಹಾಗೂ ಗೂಡ್ಸ್ ಸರ್ವಿಸ್ ಟ್ಯಾಕ್ಸ್ ( ಜಿಎಸ್ಟಿ ) ಅಧಿಕಾರಿಗಳ ಸೋಗಿಲಳನಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿ ಸುಮಾರು ಎಂಬತ್ತೈದು ಲಕ್ಷ ಮೌಲ್ಯದ ಆಭರಣ ದೋಚಿ ಪರಾರಿ ಗೈದವರನ್ನ ಕೆ. ಆರ್. ಪುರ ಪೋಲೀಸರು ಕೇವಲ ಒಂದೇ ಗಂಟೆಯಲ್ಲಿ ಹಿಡಿಯುವ ಮೂಲಕ ದರೋಡೆಕೋರರ ದುಸ್ವಪ್ನವಾದರು. ಅಸಲಿಗೆ ಜನವರಿ ಇಪ್ಪತ್ತೆಳನೇ ತಾರೀಕು ಮಧ್ಯಾಹ್ನ ಕೆ.ಆರಾ. ಪುರ ಠಾಣಾ ಸರಹದ್ದಿನ ಭಟ್ಟರ ಹಳ್ಳಿಯ ಮಹಾಲಕ್ಷ್ಮೀ ಜ್ಯುವೆಲ್ಲರ್ಸ್ ಮೇಲೆ ಅಟ್ಯಾಕ್ ಮಾಡಿದ ಬಂಧಿತ ಸಂಪತ್(55), ಕುಮಾರ್, ಥಾಮಸ್(54),… Read More
ಕರಾವಳಿ ಭಾಗದ ಮೀನುಗಾರರ ಬದುಕು-ಬವಣೆಯ ಕಥೆ ಹೊತ್ತು ತಯಾರಾದ ‘ಮತ್ಸ್ಯಗಂಧ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ನಿಯಕ ಪೃಥ್ವಿ ಅಂಬರ್ , ನಿರ್ದೇಶಕ ದೇವರಾಜ್ ಪೂಜಾರಿ, ನಟ-ಸಂಗೀತ ನಿರ್ದೇಶಕ ಪ್ರಶಾಂತ್ ಸಿದ್ಧಿ, ನಟ ನಾಗರಾಜ್ ಬೈಂದೂರು ಸೇರೀದಂತೆ ಕರಾವಳಿಗರೇ ಹೆಚ್ಚಾಗಿ ಕೂಡಿಕೊಂಡಿರೋ ತಂಡದಿಂದ ಈ ಮತ್ಸ್ಯಗಂಧ ತಯಾರಾಗಿದ್ದು, ಇದೇ ಇಪ್ಪತ್ಮೂರಕ್ಕೆ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ. ಸಹ್ಯಾದ್ರಿ ಪ್ರೊಡಕ್ಷನ್ ಬ್ಯಾನರಿನಡಿ ಬಿ ಏಸ್ ವಿಶ್ವನಾಥ್ ನಿರ್ಮಿಸಿರುವ ಮತ್ಸ್ಯಗಂಧ ಚಿತ್ರವು, ಕರಾವಳಿ ಸಂಬಂಧಿಸಿದ ಉತ್ತರಕನ್ನಡದ ಮೀನುಗಾರರ ನಡುವಿನಲ್ಲಿ ನಡೆಯುವ ಕಥಾ ಹಂದರ… Read More
ಕಾಡಲ್ಲಿ ಆಗಾಗ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಪ್ರಕರಣಗಳತ್ತ ವಿಶೇಷ ಗಮನ ಹರಿಸಿದಂತಿರುವ ಅರಣ್ಯ ಇಲಾಖೆ ಆ ಬಗ್ಗೆ ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ. ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಕೆಲವೇ ಗಂಟೆಗಳಲ್ಲಿ ಮಾಹಿತಿ ಪೂರೈಸುವ ದೂರ ಸಂವೇದಿ ತಂತ್ರಜ್ಞಾನವನ್ನ ಬಳಕೆ ಮಾಡಿಕೊಳ್ಳಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಅರಣ್ಯ ಭವನದಲ್ಲಿ ನಡೆದ ಅರಣ್ಯಾಧಿಕಾರಿಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸಮ್ಮುಖದಲ್ಲಿ ದೂರ ಸಂವೇದಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ವೀಕ್ಷಿಸಲಾಯಿತು. ಈ ತಂತ್ರಜ್ಞಾನವು ಉಪಗ್ರಹಗಳ ನೆರವಿನೊಂದಿಗೆ ಕಾರ್ಯ… Read More
ಮಂಡ್ಯ: ಜಿಲ್ಲೆಯನಾಗಮಂಗಲದಆದಿಚುಂಚನಗಿರಿಮಠದಿಂದಕೊಡಮಾಡುವ 2024ನೇಸಾಲಿನಪ್ರತಿಷ್ಠಿತ ‘ವಿಜ್ಞಾತಂ’ರಾಷ್ಟ್ರೀಯಪ್ರಶಸ್ತಿಗೆ, ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯ (ಇಸ್ರೊ) ಅಧ್ಯಕ್ಷ, ಎಸ್.ಸೋಮನಾಥ್ಆಯ್ಕೆಯಾಗಿದ್ದಾರೆ. ಸ್ವತ: ಎಂಜಿನಿಯರಿಂಗ್ಪದವಿದರಾದ, ಡಿ. ನಿರ್ಮಲಾನಂದಸ್ವಾಮಿಜಿಯವರಹನ್ನೊಂದನೇವರ್ಷದಪಟ್ಟಾಭಿಶೇಕಮಹೋತ್ಸವದಅಂಗವಾಗಿ, ಪೆಬ್ರವರಿ 19 ಹಾಗೂ 20 ರಂದುಜ್ಞಾನ-ವಿಜ್ಞಾನ-ತಂತ್ರಜ್ಞಾನಮೇಳವನ್ನುಆಯೋಜಿಸಲಾಗಿದೆ.ಹತ್ತೊಂಬತ್ತಕ್ಕೆವಸ್ತುಪ್ರದರ್ಶನಇರಲಿದೆ. ಇಪ್ಪತ್ತಕ್ಕೆಸ್ವಾಮಿಜಿಯವರಪಟ್ಟಾಭಿಶೇಕಮಹೋತ್ಸವದಜೊತೆಯಲ್ಲಿಪ್ರಶಸ್ತಿಪ್ರದಾನಕಾರ್ಯಕ್ರಮನೆರವೇರಲಿದೆ. ಅಂದಹಾಗೆ, ಇಸ್ರೊಅಧ್ಯಕ್ಷಸೋಮನಾಥ್ಅವರಿಗೆಪರದಾನಮಾಡಲಾಗುವ ‘ವಿಜ್ಞಾತಂ’ ಪ್ರಶಸ್ತಿಯು ₹5 ಲಕ್ಷನಗದುಹಾಗೂಸ್ಮರಣಿಕೆಯನ್ನುಒಳಗೊಂಡಿದೆ. ಕಳೆದವರ್ಷದಲ್ಲಿಉಡಾವಣೆಗೊಂಡುಯಶಸ್ವಿಯಾಗಿದ್ದಚಂದ್ರಯಾನ-3, ಆದಿತ್ಯಎಲ್-1 ಸಮಯದಇವರಕಾರ್ಯಾವೈಖರಿಯುಇಡೀವಿಶ್ವದಗಮನಸೆಳೆವಂತೆಮಾಡಿತ್ತು. ಆನಿಟ್ಟಲ್ಲಿಈಶ್ರೇಷ್ಠವಿಜ್ಜಾನಿಗೆಆದಿಚುಂಚನಗಿರಿಮಠದವತಿಯಿಂದವಿಶೇಷವಾಗಿಗೌರವಸಮರ್ಪಿಸಲು, ಈಪ್ರತಿಷ್ಠಿತಪ್ರಶಸ್ತಿಯನ್ನುನೀಡಲಾಗುತ್ತಿದೆ.
ಜನವರಿ ಇಪ್ಪತ್ತೆರಡರ ಅಮೃತ ಘಳಿಗೆಯಲ್ಲಿ ಶ್ರೀರಾಮರ ಬಾಲ ವಿಗ್ರಹ ಪ್ರತಿಷ್ಠಾಪನೆಯಾಗಿ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಹಿಂದೂ ಬಾಂಧವರಿಗೆ ಅದು ನಿಜಕ್ಕೂ ಅಮೃತ ಘಳಿಗೆ. ಅವಿರತ ಹೋರಾಟದ ಫಲವಾಗಿ ಅಯೋಧ್ಯಯಲ್ಲಿ ಕೊನೆಗೂ ಅಂದು ಬಾಲ ರಾಮ ಪ್ರತಿಷ್ಠಾಪನೆಗೊಂಡು ಪ್ರತಿ ಹಿಂದೂಗಳ ಹೃದಯದಲ್ಲಿ ಪ್ರಭು ಶ್ರೀರಾಮ ನೆಲೆಯಾದ ದಿನವದು. ವಿಶೇಷವಾಗಿ ನಮ್ಮ ಮೈಸೂರರಿನ ಶಿಲ್ಪಿ ‘ಅರುಣ್ ಯೋಗಿರಾಜ್’ ಮೂಲಕ ಬಾಲರಾಮರ ಕೆತ್ತನೆಯಾಗಿದ್ದು, ಕರ್ನಾಟಕದ ಪಾಲಿಗೆ ಬಲು ವಿಶೇಷವೇ ಆಗಿಹೋಯ್ತು. ನಮ್ಮ ನಾಡಿನ ಕಲ್ಲು, ನಮ್ಮ ನಾಡಿನ ಶಿಲ್ಪಿಯೇ ಕೆತ್ತಿದ ಶ್ರೀರಾಮ ಅಯೋಧ್ಯೆಯಲ್ಲಿ… Read More
ಚಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಕನ್ನಡ ಚಿತ್ರರಂಗದ ಮಟ್ಟಿಗೆ ಆ ಪಾಟಿ ‘ಪ್ಯಾನ್ ಬೇಸ್’ ಬೇರೆ ಯಾವ ನಟರಿಗೂ ಇಲ್ಲ. ಸಾರಥಿ ಚಿತ್ರದ ನಂತರದಿಂದ ಇತ್ತೀಚಿನ ಇವರ ನಟನೆಯ ಪ್ರತಿ ಸಿನಿಮಾಗಳೂ ಒಂದು ಹಿಡಿ ಹೆಚ್ಚೇ ಹೈಪ್ ಪಡೆದುಕೊಳ್ಳುತ್ತಿವೆ. ಅಭಿಮಾನಿಗಳು ಇವರ ಚಿತ್ರ ಅನೌನ್ಸ್ ಆಗುತ್ತಿದ್ದಂತೆಯೇ ಹೆಗಲಮೇಲೆ ಹೊತ್ತು ಪ್ರಚಾರ ಆರಂಭಿಸಲು ಶುರುವಿಡುತ್ತಾರೆ. ಅಲ್ಲಿಗೆ ಬಾಕ್ಸ್ ಆಪೀಸ್ ಗಟ್ಟಿಗೊಳ್ಳುತ್ತಾ ಸಾಗುತ್ತೆ. ಹಾಗೆಯೇ ‘ತರುಣ್ ಸುಧೀರ್’ ನಿರ್ದೇಶನದ ‘ಕಾಟೇರ’ ಸಿನಿಮಾ ತೆರೆಕಂಡು ಹತ್ತಿರತ್ತಿರ ಐವತ್ತು ದಿನ ಪೂರೈಸುತ್ತಾ… Read More
