ದೇಶ, ವಿದೇಶ
January 10, 2025
53 views 1 sec 0

Holy dip in river Ganges: ಗಂಗೆಯಲ್ಲಿ ಪುಣ್ಯಸ್ನಾನ ಮಾಡದೇ ಹಿಂದಿರುಗಿದ್ದರೇ ಮಾರಿಷಿಯಸ್ ಪ್ರಧಾನಿ?

2013ರ ಕುಂಭಮೇಳದ ಘಟನೆ ಬಿಚ್ಚಿಟ್ಟ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೊಳಕು, ತ್ಯಾಜ್ಯ ನೋಡಿ ಗಂಗಾಸ್ನಾನ ಮಾಡದೇ ವಾಪಸಾಗಿದ್ದ ವಿದೇಶಿ ನಾಯಕ ಹಿಂದಿನ ಸಮಾಜವಾದಿ ಪಕ್ಷದ ಅವಧಿಯಲ್ಲಿನ ಅವ್ಯವಸ್ಥೆ ಬಗ್ಗೆ ಯೋಗಿ ಕಿಡಿ ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವೆ ವಾಗ್ಯುದ್ಧವೂ ಆರಂಭವಾಗಿದೆ. ಹಿಂದಿನ ಎಸ್ಪಿ ನೇತೃತ್ವದ ಸರ್ಕಾರದ ಆಡಳಿತದ ವಿರುದ್ಧ ಹರಿಹಾಯ್ದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2013ರಲ್ಲಿ ಕುಂಭಮೇಳಕ್ಕೆ… Read More

ಧರ್ಮ-ಸನಾತನ, ದೇಶ, ವಿದೇಶ
January 09, 2025
54 views 5 secs 0

(Kumbh Mela)ಕುಂಭಮೇಳದಲ್ಲಿ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್‌ ಪತ್ನಿಯಿಂದ ವ್ರತ!

ಕಲ್ಪವಾಸ್ ವ್ರತ ಕೈಗೊಳ್ಳಲಿರುವ ಲಾರೀನ್ ಪೋವೆಲ್ ಜಾಬ್ಸ್‌ ಆತ್ಮಶುದ್ಧಿಗಾಗಿ ಭಾರತಕ್ಕೆ ಬಂದ ವಿಶ್ವದ ಶ್ರೀಮಂತ ಮಹಿಳೆ ಪ್ರಯಾಗ್‌ರಾಜ್: ಇದೇ 13ರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (kumba mela) ಆರಂಭವಾಗಲಿದ್ದು, ವಿಶ್ವದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಯಾತ್ರಾರ್ಥಿಗಳು ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಳ್ಳುವವರಿದ್ದಾರೆ. ವಿಶೇಷವೆಂದರೆ ಈ ಬಾರಿಯ ಮಹಾಕುಂಭದಲ್ಲಿ ಅಮೆರಿಕದ ಆ್ಯಪಲ್ ಕಂಪನಿಯ ಸಹಸ್ಥಾಪಕ ಮತ್ತು ಮಾಜಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್‌(Steve Jobs) ಅವರ ಪತ್ನಿ, ಜಗತ್ತಿನ ಶ್ರೀಮತ ಮಹಿಳೆಯರ ಪೈಕಿ ಒಬ್ಬರಾದ ಲಾರೀನ್ ಪೋವೆಲ್… Read More

ವಿದೇಶ
January 09, 2025
58 views 11 secs 0

(California shocked by wildfires ) ಕಾಡ್ಗಿಚ್ಚಿಗೆ ಬೆಚ್ಚಿಬಿದ್ದ ಕ್ಯಾಲಿಫೋರ್ನಿಯಾ: ಹಾಲಿವುಡ್ ತಾರೆಯರಿಗೆ ತಟ್ಟಿದ ಬಿಸಿ, ತುರ್ತು ಪರಿಸ್ಥಿತಿ ಘೋಷಣೆ ಲಾಸ್ ಏಂಜಲೀಸ್:

ಅಮೆರಿಕದ ಲಾಸ್ ಏಂಜಲೀಸ್(Los Angeles)ನಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು(Wildfire) ಹಬ್ಬುತ್ತಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಕಾಡ್ಗಿಚ್ಚಿಗೆ 5 ಮಂದಿ ಬಲಿಯಾಗಿದ್ದಾರೆ. 70 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಹಾಲಿವುಡ್(Hollywood)ನ ಪ್ರಮುಖ ತಾರೆಯರು, ಗಾಯಕರು ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೂ ಇದರ ಬಿಸಿ ತಟ್ಟಿದೆ. ಪ್ಯಾಲಿಸೇಡ್ಸ್(Palisades), ಈಟನ್(Eaton) ಮತ್ತು ಹರ್ಸ್ಟ್(Hurst) ಪ್ರದೇಶಗಳಲ್ಲಿ ಗಾಳಿಯ ವೇಗ ಅಧಿಕವಾಗಿರುವುದರಿಂದ ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ(California) ಆಡಳಿತವು ಈ ಪ್ರಾಂತ್ಯದಲ್ಲಿ “ಕಾಡ್ಗಿಚ್ಚು… Read More

ವಿದೇಶ
January 07, 2025
39 views 0 secs 0

8 ತಿಂಗಳ ಮಗುವಿಗೆ HMP ವೈರಸ್: ಹೇಗಿದೆ ಆರೋಗ್ಯ ಸ್ಥಿತಿ?

ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಎಚ್ಎಂಪಿ ವೈರಸ್ ಬೆಂಗಳೂರಿಗೂ ಎಂಟ್ರಿ ಕೊಟ್ಟಿದ್ದು, 8 ತಿಂಗಳ ಮಗುವಿನಲ್ಲಿ ಕಾಣಿಸಿಕೊಂಡಿತ್ತು. ಇದು ದೊಡ್ಡ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಮಗುವಿನ ಆರೋಗ್ಯದ ಬಗ್ಗೆ ಅಪ್ಡೇಟ್ ಸಿಕ್ಕಿದೆ. ವೈರಸ್ ಗೆ ಗುರಿಯಾಗಿದ್ದ ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಗು ಲವಲವಿಕೆಯಿಂದ ಇದೆ. ಜ್ವರ ಮತ್ತು ಕಫ ಕಡಿಮೆಯಾಗಿದೆ. ಆದರೆ, ಮೈ ಕೈ ನೋವು, ಸ್ವಲ್ಪ ಸುಸ್ತು ಇದೆ. ಸದ್ಯ ಮಗು ಆಹಾರ ಸೇವಿಸುತ್ತ ಗುಣಮುಖವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಜನರಲ್ ವಾರ್ಡ್ ನಲ್ಲಿಯೇ… Read More

ವಿದೇಶ
January 07, 2025
57 views 1 sec 0

ಚೀನಾದಲ್ಲಿ ತೀವ್ರ ಭೂಕಂಪ: 30ಕ್ಕೂ ಅಧಿಕ ಜನರು ಬಲಿ!

ನೇಪಾಳ, ಚೀನಾ, ಭಾರತ ಸೇರಿದಂತೆ ಹಲವೆಡೆ ಮಂಗಳವಾರ ಭೂಕಂಪನದ ಅನುಭವವಾಗಿದೆ.ಈ ಪೈಕಿ ಚೀನಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಟಿಬೆಟ್‌ ನಲ್ಲಿ ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಟಿಬೆಟ್‌ ನ ಶಿಗಾಟ್ಸೆ ನಗರದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶ ಭಯಭೀತವಾಗಿದೆ. ಭೂಕಂಪನದಿಂದ ಭಾರತ, ನೇಪಾಳ ಮತ್ತು ಭೂತಾನ್‌ ನ ಹಲವು ಪ್ರದೇಶಗಳಲ್ಲಿ ಕಟ್ಟಡಗಳು ನಲುಗಿರುವ ಅನುಭವವಾಗಿದೆ. ಅಲ್ಲದೇ, ಸಾವಿನ ಸಂಖ್ಯೆ… Read More

ವಿದೇಶ
January 07, 2025
15 views 0 secs 0

ಚೀನಾದ ಆಸಲಿ ಮುಖವಾಡ ಬಿಚ್ಚಿಟ್ಟ ಕನ್ನಡಿಗ ರಾಜು ನಾಯಕ್

ಚೀನಾ: ಚೀನಾ ದೇಶದಲ್ಲಿ ಮತ್ತೊಂದು ವೈರಸ್ ಬಂದಿದೆ. ಕೊರೊನಾ ವೈರಸ್ ಸಹ ಬಂದಿದ್ದು ಚೀನಾ ದೇಶದಿಂದಲೇ. ಈಗ ಅದೇ ದೇಶದಲ್ಲಿ ಮತ್ತೊಂದು ಹೊಸ ವೈರಸ್ HMPV ಭಾರತಕ್ಕೆ ಕಾಲಿಡುತ್ತಿದೆ. ಈಗಾಗಲೇ ಚೀನಾ ದೇಶದ ಪರಿಸ್ಥಿತಿ ಅಲ್ಲೋಲ ಕಲ್ಲೋಲ ಆಗಿಬಿಟ್ಟಿದೆ ಎಂಬ ಇತ್ಯಾದಿ ಸುದ್ದಿಗೆಲ್ಲಾ ಕನ್ನಡಿಗ ರಾಜು ನಾಯಕ್ ಇತಿಶ್ರೀ ಹಾಡಿದ್ದಾರೆ. 2008 ರಿಂದ ಚೀನಾ ದೇಶದಲ್ಲಿ ವಾಸವಾಗಿರುವ ಕನ್ನಡಿಗ ರಾಜು ನಾಯಕ್, ವಿಶೇಷವಾದ ವಿಡಿಯೋ ಒಂದನ್ನು ಮಾಡಿದ್ದು, ಚೀನಾ ದೇಶದ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ. ಚೀನಾ ದೇಶದಲ್ಲಿ ಯಾವುದೇ… Read More

ವಿದೇಶ, ಕ್ರೀಡೆ
January 06, 2025
53 views 0 secs 0

ದಿವ್ಯಾಂಗರ ಟ್ರೋಫಿ: ಭಾರತದ ಮೊದಲ ಎದುರಾಳಿ ಪಾಕ್

ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾಗಿದ್ದು, ಭಾರತೀಯ ತಂಡ ಪ್ರಕಟಿಸಲಾಗಿದೆ.ಶ್ರೀಲಂಕಾದಲ್ಲಿ ದಿವ್ಯಾಂಗರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ನಡೆಯಲಿದ್ದು, ಜನವರಿ 12ರಿಂದ ಪಂದ್ಯಗಳು ಆರಂಭವಾಗಲಿವೆ. ಟೂರ್ನಿಗೆ 17 ಜನ ಸದಸ್ಯರ ಭಾರತ ದಿವ್ಯಾಂಗ ತಂಡ ಪ್ರಕಟಿಸಲಾಗಿದೆ. ದಿವ್ಯಾಂಗ ಚಾಂಪಿಯನ್ಸ್ ಟ್ರೋಫಿಯನ್ನು 2019 ರ ನಂತರ ಮೊದಲ ಬಾರಿಗೆ ಆಡಲಾಗುತ್ತಿದೆ. 17 ಸದಸ್ಯರ ಭಾರತ ತಂಡಕ್ಕೆ ವಿಕ್ರಾಂತ್ ರವೀಂದ್ರ ಕೇಣಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ರವೀಂದ್ರ ಗೋಪಿನಾಥ್ ಸಂತೆ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಇದು ಸಮತೋಲಿತ ತಂಡವಾಗಿದ್ದು, ಯಾವುದೇ ಎದುರಾಳಿಯನ್ನು ಎದುರಿಸಲು ಸಿದ್ಧವಾಗಿದೆ… Read More

ವಿದೇಶ
January 06, 2025
60 views 1 sec 0

ಸಿಲಿಕಾನ್ ಸಿಟಿ ಮಂದಿಯ ನಿದ್ದೆಗೆಡಿಸಿದ ಚೀನಾ ದೇಶದ ಎಚ್ಎಂಪಿ ವೈರಸ್!

ಚೀನಾ ದೇಶದಲ್ಲಿ ದೊಡ್ಡ ಸದ್ದು ಮಾಡಿರುವ HMP ವೈರಸ್ ಈಗ ಜಾಗತಿಕ ಮಟ್ಟದ ವೈರಸ್ ಆಗಿ ಬೆಳೆದು ನಿಂತಿದೆ. ಹೀಗಾಗಿ ಇಡೀ ವಿಶ್ವ ಮತ್ತೊಮ್ಮೆ ಆತಂಕದಲ್ಲಿ ಜೀವನ ಕಳೆಯುವಂತಾಗುತ್ತಿದೆ. ಹೊಸ ರೂಪಾಂತರಿ HMP ವೈರಸ್ ಸಿಲಿಕಾನ್ ಸಿಟಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ ಅಗಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿ ಕೆಲ ಸೂಚನೆಗಳನ್ನು ನೀಡಿದೆ. ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ಮನೆ ಮಾಡುತ್ತಿದೆ. ಕೊವೀಡ್ ನ್ನು ಹೊಸ ರೂಪಾಂತರಿ ವೈರಸ್ HMP ವೈರಸ್… Read More

ವಿದೇಶ
January 04, 2025
57 views 0 secs 0

ಪಾಕ್ ಸೈನಿಕರಿದ್ದ ಬಸ್ ಮೇಲೆ ಬಾಂಬ್ ದಾಳಿ!!

ನವದೆಹಲಿ: ಪಾಕ್ ಸೈನಿಕರಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆದಿದ್ದು, ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪಾಕಿಸ್ತಾನದ ಬಲೂಚಿಸ್ತಾನದ ಟರ್ಬತ್ ನಲ್ಲಿ ಈ ದಾಳಿ ನಡೆದಿದೆ. ಪಾಕ್ ಸೈನಿಕರು ತೆರಳುತ್ತಿದ್ದ ಬಸ್ ಮೇಲೆ ಬಾಂಬ್ ಹಾಕಲಾಗಿದೆ. ಪರಿಣಾಮ ನಾಲ್ವರು ಸುಟ್ಟು ಕರಕಲಾಗಿದ್ದಾರೆ. ಅಲ್ಲದೇ, ಈ ವಾಹನದಲ್ಲಿ ಸುಮಾರು 48 ಜನರು ತೆರಳುತ್ತಿದ್ದರು ಎನ್ನಲಾಗಿದೆ. ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂಬ್ ದಾಳಿಯಿಂದಾಗಿ ಬಸ್ ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಬಾಂಬ್ ದಾಳಿಯ ಹಿಂದೆ… Read More

ಕ್ರೀಡೆ, ವಿದೇಶ
January 04, 2025
59 views 1 sec 0

ಟೆಸ್ಟ್ ನಲ್ಲಿ ಅತೀ ವೇಗದ ಅರ್ಧ ಶತಕ ಸಿಡಿಸಿದ ರಿಷಭ್ ಪಂತ್!

ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಭ್ ಪಂತ್ ಅತೀ ವೇಗದ ಅರ್ಧ ಶತಕ ಸಿಡಿಸಿದ್ದಾರೆ. ಭಾರತ ತಂಡದ ಪರ ಎರಡು ಬಾರಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ರಿಷಭ್ ಪಂತ್ (Rishabh Pant) ಪಾಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ರಿಷಭ್ ಪಂತ್ ಈ ದಾಖಲೆ ಮಾಡಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ರಿಷಭ್ ಪಂತ್ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಮೊದಲ ಎಸೆತದಲ್ಲೇ… Read More